
ಯಾವಾಗಲೂ ನನ್ನನ್ನೇ ನೋಡುತ್ತಾ, ನನ್ನ ಜೊತೆ ಮಾತನಾಡುತ್ತಾ,ನಾನೇನು ಬೈದರೂ ಜಗಳವಾಡಿದರೂ ಮನಸ್ಸಿಗೆ ಹಚ್ಚಿಕೊಳ್ಳದೇ, ನಾನು ಅತ್ತಾಗ ಅವನೂ ಅಳುತ್ತಾ,ಬೇಸರ ಪಟ್ಟಾಗ ಅವನೂ ಬೇಸರಪಡುತ್ತಾ ನನಗೆ ‘ಸಾಥ್’ ನೀಡುತ್ತಿದ್ದಾತ ಈಗ ನನ್ನ ಮುಂದಿಲ್ಲ.ಇತ್ತೀಚಿಗೆ ನಡೆದ ಬೈಕ್ ಅಫಘಾತದಲ್ಲಿ ಆತ ಇಹಲೋಕ ತ್ಯಜಿಸಿದನೆಂಬ ಸುದ್ದಿ ನನ್ನ ಅರ್ಧ ಜೀವವನ್ನೇ ಇಹಲೋಕ ತ್ಯಜಿಸಿಸಿತ್ತು!
ಆವನ ಜೊತೆ ಕಳೆದ ಕ್ಷಣಗಳೆಲ್ಲಾ ನನ್ನ ಕಣ್ಣಿಗೆ ಕಟ್ಟುತ್ತಿದೆ.ಅನೇಕ ದೇವಸ್ಥಾನ ಪಾರ್ಕನ್ನು ಕೈ-ಕೈ ಹಿಡಿದು ‘ಸಪ್ತಪದಿ’ಯೆಂದು ತಿಳಿದು ಸುತ್ತಾಡಿದ್ದು, ನನ್ನನ್ನು ನೋಡಲು ಬಿಸಿಲು-ಮಳೆ-ಗಾಳಿಯನ್ನು ಲೆಕ್ಕಿಸದೇ ಆತ ಬೈಕ್ ನಲ್ಲಿ ಬರುತ್ತಿದ್ದುದು,ಪಾರ್ಕ್ ನಲ್ಲಿ ಆತ ಕೊಟ್ಟಿದ್ದ ಪ್ರಿತಿಯ ಅಪ್ಪುಗೆಯ ಮುತ್ತು, ನನ್ನ ಗಲ್ಲವನ್ನು ಕೈಯಿಂದ ಹಿಡಿದು ಮಾತನಾಡುತ್ತಿದ್ದ ಆತನ ಮಾತುಗಳು ಕನಸಿನಲ್ಲಿ ಪುನರಾವರ್ತನೆಯಾಗಿ ಕಳೆದು ಹೋದ ಕ್ಷಣಗಳನ್ನು ನೆನಪಿಸುತ್ತದೆ.
ಆತ ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗುತ್ತಿದ್ದುದರಿಂದ ಮನೆಯಲ್ಲಿ ಫೋನಿದ್ದರೂ ಮನೆಯವರ ಕಣ್ಣು ತಪ್ಪಿಸಿ ದಿನಾಲೂ ಕಾಯಿನ್ ಬಾಕ್ಸ್ ಗೆ ಹೋಗಿ ಫೋನ್ ಮಾಡಿ ಆತನನ್ನು ಎಬ್ಬಿಸಿ ‘ಗುಡ್ ಮಾರ್ನಿಂಗ್’ ಹೇಳುತ್ತಿದ್ದುದು ಈಗ ಬರೀ ನೆನಪಷ್ಟೇ ! ಆ ಕಾಯಿನ್ ಬಾಕ್ಸ್ ನನ್ನ ಕಣ್ಣೆದುರಿಗೆ ಬಿದ್ದಾಗ ಬಿಕ್ಕಿ-ಬಿಕ್ಕಿ ಅಳುತ್ತೇನೆ. ನಮ್ಮಿಬ್ಬರ ದಾಂಪತ್ಯ ಹೀಗೇ ಇರಬೇಕು, ನಮ್ಮ ಮಕ್ಕಳನ್ನು ಹೀಗೇ ಬೆಳೆಸಬೇಕು ಎಂದು ಕಂಡಿದ್ದ ಕನಸೆಲ್ಲಾ ಈಗ ಕನಸಾಗಿಯೇ ಉಳಿದಿದೆ. ‘ನಿನಗೆ ನನ್ನ ಮೇಲೇ ಪ್ರೀತೀನೆ ಇಲ್ಲಾ’ ಎಂದು ನಾನು ಸುಮ್ ಸುಮ್ನೆ ರೇಗಾಡುತ್ತಿದ್ದಾಗ ‘ನಾನು ಸತ್ತ ಮೇಲೆ ನಿನಗೆ ನನ್ನ ಪ್ರೀತಿ ಅರ್ಥವಾಗುತ್ತೆ’ ಅನ್ನುತ್ತಿದ್ದ ಆತನ ಮಾತು ಈಗ ನಿಜವಾಗಿದೆ.
ನನ್ನ ಪ್ರೀತಿಯ ‘ದಿನ್ನು’...ಈ ಲೋಖದಲ್ಲಿ ನಿನ್ನ ಕೈ ಹಿಡಿಯುವ ಅದೃಷ್ಟಕ್ಕೆ ಆ ಭಗವಂತ ಕಲ್ಲು ಹಾಕಿದ.ಮುಂದಿನ ಜನ್ಮದಲ್ಲಾದರೂ ನಿನ್ನವಳಾಗಿರುತ್ತೇನೆ.ನನ್ನ ನಿನ್ನ ಪ್ರೀತಿ ಅಮರ-ಶಾಶ್ವತವಾಗಿರಲಿ...
ಆವನ ಜೊತೆ ಕಳೆದ ಕ್ಷಣಗಳೆಲ್ಲಾ ನನ್ನ ಕಣ್ಣಿಗೆ ಕಟ್ಟುತ್ತಿದೆ.ಅನೇಕ ದೇವಸ್ಥಾನ ಪಾರ್ಕನ್ನು ಕೈ-ಕೈ ಹಿಡಿದು ‘ಸಪ್ತಪದಿ’ಯೆಂದು ತಿಳಿದು ಸುತ್ತಾಡಿದ್ದು, ನನ್ನನ್ನು ನೋಡಲು ಬಿಸಿಲು-ಮಳೆ-ಗಾಳಿಯನ್ನು ಲೆಕ್ಕಿಸದೇ ಆತ ಬೈಕ್ ನಲ್ಲಿ ಬರುತ್ತಿದ್ದುದು,ಪಾರ್ಕ್ ನಲ್ಲಿ ಆತ ಕೊಟ್ಟಿದ್ದ ಪ್ರಿತಿಯ ಅಪ್ಪುಗೆಯ ಮುತ್ತು, ನನ್ನ ಗಲ್ಲವನ್ನು ಕೈಯಿಂದ ಹಿಡಿದು ಮಾತನಾಡುತ್ತಿದ್ದ ಆತನ ಮಾತುಗಳು ಕನಸಿನಲ್ಲಿ ಪುನರಾವರ್ತನೆಯಾಗಿ ಕಳೆದು ಹೋದ ಕ್ಷಣಗಳನ್ನು ನೆನಪಿಸುತ್ತದೆ.
ಆತ ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗುತ್ತಿದ್ದುದರಿಂದ ಮನೆಯಲ್ಲಿ ಫೋನಿದ್ದರೂ ಮನೆಯವರ ಕಣ್ಣು ತಪ್ಪಿಸಿ ದಿನಾಲೂ ಕಾಯಿನ್ ಬಾಕ್ಸ್ ಗೆ ಹೋಗಿ ಫೋನ್ ಮಾಡಿ ಆತನನ್ನು ಎಬ್ಬಿಸಿ ‘ಗುಡ್ ಮಾರ್ನಿಂಗ್’ ಹೇಳುತ್ತಿದ್ದುದು ಈಗ ಬರೀ ನೆನಪಷ್ಟೇ ! ಆ ಕಾಯಿನ್ ಬಾಕ್ಸ್ ನನ್ನ ಕಣ್ಣೆದುರಿಗೆ ಬಿದ್ದಾಗ ಬಿಕ್ಕಿ-ಬಿಕ್ಕಿ ಅಳುತ್ತೇನೆ. ನಮ್ಮಿಬ್ಬರ ದಾಂಪತ್ಯ ಹೀಗೇ ಇರಬೇಕು, ನಮ್ಮ ಮಕ್ಕಳನ್ನು ಹೀಗೇ ಬೆಳೆಸಬೇಕು ಎಂದು ಕಂಡಿದ್ದ ಕನಸೆಲ್ಲಾ ಈಗ ಕನಸಾಗಿಯೇ ಉಳಿದಿದೆ. ‘ನಿನಗೆ ನನ್ನ ಮೇಲೇ ಪ್ರೀತೀನೆ ಇಲ್ಲಾ’ ಎಂದು ನಾನು ಸುಮ್ ಸುಮ್ನೆ ರೇಗಾಡುತ್ತಿದ್ದಾಗ ‘ನಾನು ಸತ್ತ ಮೇಲೆ ನಿನಗೆ ನನ್ನ ಪ್ರೀತಿ ಅರ್ಥವಾಗುತ್ತೆ’ ಅನ್ನುತ್ತಿದ್ದ ಆತನ ಮಾತು ಈಗ ನಿಜವಾಗಿದೆ.
ನನ್ನ ಪ್ರೀತಿಯ ‘ದಿನ್ನು’...ಈ ಲೋಖದಲ್ಲಿ ನಿನ್ನ ಕೈ ಹಿಡಿಯುವ ಅದೃಷ್ಟಕ್ಕೆ ಆ ಭಗವಂತ ಕಲ್ಲು ಹಾಕಿದ.ಮುಂದಿನ ಜನ್ಮದಲ್ಲಾದರೂ ನಿನ್ನವಳಾಗಿರುತ್ತೇನೆ.ನನ್ನ ನಿನ್ನ ಪ್ರೀತಿ ಅಮರ-ಶಾಶ್ವತವಾಗಿರಲಿ...
1 comment:
you are using such a good words it touches to the heart....
Post a Comment